ಕೄಷಿ

Friday, June 18, 2010

ವಸಂತ ಬರೆದ ಒಲವಿನ ಚಿತ್ತಾರ


ಕಳೆದ ಬಾರಿ ಇನ್ನೊಂದಿಷ್ಟು ಚಿತ್ರಗಳನ್ನು ಹಾಕುತ್ತೇನೆ ಎಂದು ಹೇಳಿದ್ದೆ. ಈ ಮಧ್ಯೆ ಊರಿಗೆ
ಹೋಗಿ ಬರಬೇಕಾಯಿತು. ತಿರುಗಿ ಬಂದಾಗ ಇಲ್ಲಿನ ಚಿತ್ರವೇ ಬೆರೆಯಾಗಿತ್ತು. ಹೋಗುವಾಗ ಇದ್ದ ಹೂವುಗಳ
ಜಾಗದಲ್ಲಿ ಬೇರೆಯದೇ ಬಣ್ಣದ ಹೂವುಗಳು ತಲೆ ಎತ್ತಿದ್ದವು. ಕೆಲವನ್ನು ಇಲ್ಲಿ
ಹಾಕುತ್ತಿದ್ದೇನೆ. ನೋಡಿ.

ಛಳಿಗಾಲ್ಲಿ ಎಲೆ ಉದುರಿಸಿದ ಸಸ್ಯಗಳಿಗೆ ಈಗ ಸಂಭ್ರಮದ ಕಾಲ. ಬೆಳಿಗ್ಗೆ ಐದಕ್ಕೆಲ್ಲ ಕಾಣಿಸುವ ಸೂರ್ಯ ಸಂಜೆ ಮುಳುಗುವುದು ಹತ್ತು ಘಂಟೆಯ ನಂತರ. ಧಾರಾಳ ಬಿಸಿಲು. ದಿನಕ್ಕೆ ಒಂದೂವರೆ ದಿನದ ಬೆಳವಣಿಗೆ. ಮತ್ತೆ ಛಳಿಗಾಲ ಬರುವುದರೊಳಗೆ ಜೀವನ ಚಕ್ರ ಮುಗಿಸಬೇಲ್ಲ! ಬದುಕಿನ ಹೋರಾಟದಲ್ಲಿ ಬದಲಾವಣೆಗಳಿ ಅನಿವಾರ್ಯ!.