http://www.adikepatrike.com/
ನೇರವಾಗಿ ಅಡಿಕೆ ಪತ್ರಿಕೆಯ ಜಾಲತಾಣದಿಂದ (http://www.adikepatrike.com/) pdf ನಂತೆ ಡೌನಲೋಡ್ಮಾಡಿಯೂ ಓದಬಹುದು.


ಜೀಪು ಅಘನಾಶಿನಿ ಕಣಿವೆಯಲ್ಲಿ ಜಲ ವಿದ್ಯುತ ಯೋಜನೆಗೆ ಸರ್ವೆ ಮಾಡಲು ಬರುವ ಅಧಿಕಾರಿಗಳದ್ದಾಗಿತ್ತು. ನಮ್ಮ ಮನೆ ಹತ್ತಿರವೇ ಅಘನಾಶಿನಿ ಯೋಜನೆಯ ವಿದ್ಯುತ ಘಟಕ ಯೋಜಿತವಾಗಿದ್ದರಿಂದ ತುಂಬಾ ದಿನಗಳವೆರೆಗೆ ಸರ್ವೆ ಕಾರ್ಯ ನಡೆಯುತ್ತಿತ್ತು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಇರುವ ಮತ್ತು ಪ್ರಸ್ತಾಪಿಸಲಾದ ಯೋಜನೆಗಳು
ಬೇಡ್ತಿ ಅಘನಾಶಿನಿ ಯೋಜನೆಗಳು ಕಳೆದ ನಾಲ್ಕು ದಶಕಗಳಿಂದ ಉತ್ತರ ಕನ್ನಡದ ಜನರನ್ನು ಕಾಡುತ್ತಿರುವ ಸಮಸ್ಯೆ. ತೀರ ಇತ್ತೀಚೆಗೆ ಸಹ ಮತ್ತೆ ಪ್ರಸ್ತಾಪವಾಗಿತ್ತು. ಈ ಪ್ರದೇಶದ ಸರಿ ಸುಮಾರು ಎರಡು ತಲೆಮಾರು ಈ ಯೋಜನೆಗಳ ಭಯದಲ್ಲೇ ಬದುಕಿವೆ. ಎಷ್ಟೊತ್ತಿಗೆ ಊರು ಬಿಟ್ಟು ಹೊರಡಬೇಕಾದ ಪರಿಸ್ಥಿತಿ ಬರಬಹುದೆಂದೆನ್ನುವ ಆತಂಕದಲ್ಲಿ ಕಳೆದಿದ್ದಾರೆ.
ಈಗ ಕಳೆದ ಅಗಷ್ಟ ತಿಂಗಳಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಭಾಗದ ಜನ ನೆಮ್ಮದಿಯ ನಿಟ್ಟಿಸಿರು ಬಿಡುವ ಸುದ್ದಿ ಹೊರ ಬಿದ್ದಿದೆ. ಎಲ್ಲ ಸುಗಮವಾಗಿ ನಡೆದರೆ, ಇನ್ನು ಅಂಥ ಭಾರೀ ಯೋಜೆಗಳು ಪ್ರಸ್ತಾಪವಾಗಲಾರವು ಎನ್ನುವ ಭರವಸೆ ಮೋಡಿದೆ. ಈ ಪ್ರದೇಶವನ್ನು "ಸಂರಕ್ಷಣಾ ವಲಯ " ಎಂದು ಘೋಷಿಸಲು ನಿರ್ಧರಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಪರಿಸರ ಸೂಕ್ಷ್ಮ ಪ್ರದೇಶಗಳುಅಘನಾಶಿನಿ ಸಂರಕ್ಷಣಾ ವಲಯ:
ಅಘನಾಶಿನಿ ಕಣಿವೆಯ ಉಂಚಳ್ಳಿ ಜಲಪಾತದಿಂದ ಪ್ರಾರಂಭವಾದ ಅಘಾಶಿನಿ ಕಣಿವೆಯ ಎರಡೂ ಪಕ್ಕದ ಕಾಡು, ಗುಡ್ಡೆ ಕೋಟೆ, ನಿಲ್ಕುಂದ ದೇವಿಮನೆ, ವಾಟೆಹಳ್ಳ ಜಲಪಾತ, ಭೀಮನಗುಡ್ಡ, ನಿಶಾನೆ ಗುಡ್ಡ, ಬೆಣ್ಣೆಹೊಳೆ ಕಣಿವೆ, ಬೆಣ್ಣೆಹೊಳೆ ಜಲಪಾತ ಮೊರ್ಸೆ ಊರಿನ ಹಿಂಭಾಗ, ದೊಡ್ಮನೆ ಘಟ್ಟ, ಮೊದಲಾದ ಪ್ರದೇಶಗಳನ್ನು ಒಳಗೊಂಡಿದೆ. ಒಟ್ಟೂ ಪ್ರದೇಶ 96.344 ಚ.ಕಿ.ಮೀ.
ಬೆಡ್ತಿ ನದಿ ಕಣಿವೆಯ ಮಾಗೋಡ ಜಲಪಾತದಿಂದ ಪ್ರಾರಂಭವಾಗಿ ಕಣಿವೆಯ ಎರಡೂ ಪಕ್ಕದ ಕಾಡು, ಜೇನು ಕಲ್ಲು ಗುಡ್ಡ ದಿಂದ ಕೆಳಾಸೆ ಗ್ರಾಮದವರೆಗೆ, ಶಹಿವಗಂಗಾ ಜಲಪಾತದಿಂದ, ಕೊಂಕಿ ಕೋಟೆ, ಬಿಳಿ ಹಳ್ಳ ಕಣಿವೆ ಮೊದಲಾದ ಪ್ರದೇಶಗಳನ್ನು ಒಳಗೊಂಡಿದೆ. ಒಟ್ಟೂ ಪ್ರದೇಶ 33.95 ಚ.ಕಿ.ಮೀ.
ವನ್ಯ ಜೀವಿ ಸಂರಕ್ಷಣಾ ಕಾನೂನು, 1972, (2006ರ ಸೇರ್ಪಡೆ) 36 ಆ, ದಂತೆ ಘೋಶಿಸಲಾಗುವ, ಈ ಪ್ರದೇಶದ ಸಂರಕ್ಷಣೆಯನ್ನು ಅರಣ್ಯ ಇಲಾಖೆಯೋಮದಿಗೆ ಸ್ಥಳೀಯರನ್ನೂಳಗೊಂಡ ಸಮೀತಿಯು ನಿರ್ವಹಿಸುವುದು.
ವನ್ಯ ಜೀವಿಗಳ ವಲಸೆ ಮಾರ್ಗ ಸುಸ್ಠಿರ
*********************************************************************ಕಳೆದ ಬಾರಿ ಇನ್ನೊಂದಿಷ್ಟು ಚಿತ್ರಗಳನ್ನು ಹಾಕುತ್ತೇನೆ ಎಂದು ಹೇಳಿದ್ದೆ. ಈ ಮಧ್ಯೆ ಊರಿಗೆ
ಹೋಗಿ ಬರಬೇಕಾಯಿತು. ತಿರುಗಿ ಬಂದಾಗ ಇಲ್ಲಿನ ಚಿತ್ರವೇ ಬೆರೆಯಾಗಿತ್ತು. ಹೋಗುವಾಗ ಇದ್ದ ಹೂವುಗಳ
ಜಾಗದಲ್ಲಿ ಬೇರೆಯದೇ ಬಣ್ಣದ ಹೂವುಗಳು ತಲೆ ಎತ್ತಿದ್ದವು. ಕೆಲವನ್ನು ಇಲ್ಲಿ
ಹಾಕುತ್ತಿದ್ದೇನೆ. ನೋಡಿ.
ಛಳಿಗಾಲ್ಲಿ ಎಲೆ ಉದುರಿಸಿದ ಸಸ್ಯಗಳಿಗೆ ಈಗ ಸಂಭ್ರಮದ ಕಾಲ. ಬೆಳಿಗ್ಗೆ ಐದಕ್ಕೆಲ್ಲ ಕಾಣಿಸುವ ಸೂರ್ಯ ಸಂಜೆ ಮುಳುಗುವುದು ಹತ್ತು ಘಂಟೆಯ ನಂತರ. ಧಾರಾಳ ಬಿಸಿಲು. ದಿನಕ್ಕೆ ಒಂದೂವರೆ ದಿನದ ಬೆಳವಣಿಗೆ. ಮತ್ತೆ ಛಳಿಗಾಲ ಬರುವುದರೊಳಗೆ ಜೀವನ ಚಕ್ರ ಮುಗಿಸಬೇಲ್ಲ! ಬದುಕಿನ ಹೋರಾಟದಲ್ಲಿ ಬದಲಾವಣೆಗಳಿ ಅನಿವಾರ್ಯ!.

ಛಳಿಗಾಲದಲ್ಲಿ ಎಲೆ ಉದುರಿಸಿ, ಭರಡಾಗಿದ್ದ ಕಾಡಿಗೆ, ಛಳಿಗಾಲ ಮುಗಿಯುತ್ತದ್ದ ಹಾಗೆ ವಸಂತದ ಜೀವನೋತ್ಸಾಹ! ಎಲ್ಲೆಡೆ ಹಸಿರು.
ನೆಲವೆಲ್ಲ ಆವರಿಸಿದ್ದ ಹಿಮ ಕರಗಿದ ಮೇಲೆ ಎಲೆ ಉದುರಿದ ಕಾಡಿನಲ್ಲಿ, ಎಲ್ಲ ಭಣ ಭಣ.





ಇಂತದೇ ಚಿತ್ರಗಳ ರಾಶಿ ಬಿದ್ದಿದೆ, ನನ್ನ ಕಂಪ್ಯೂಟರಿನ ಫೋಲ್ಡರಿನಲ್ಲಿ. ಯಾವುದನ್ನು ಆಯಲಿ, ಯಾವುದನ್ನ ಬಿಡಲಿ?